ಹನುಮಾನ್ ಒಬ್ಬ ವ್ಯಕ್ತಿ ಮಾತ್ರವಲ್ಲ, ಅದೊಂದು ತತ್ವ. ಸ್ವಾಮಿ ಹನುಮ ಕರುನಾಡಿನ ಆಧ್ಯಾತ್ಮಿಕ ರಾಯಭಾರಿ(Spiritual Icon). ಹನುಮನುದಿಸಿದ ನಾಡು ಕರುನಾಡು ಎಂದಿದ್ದಾರೆ ಮೇರು-ಕವಿ ಡಿ. ವಿ. ಜಿ. ಯವರು.
ಹನುಮ ಕಲಿಯುಗದ ದೈವ, ಕಲಿಯುಗ ಬ್ರಹ್ಮ ಎಂದಿದ್ದಾರೆ ಪರಾಶರ ಮುನಿಗಳು. ಕಲಿಯುಗದವರು ತಮ್ಮೆಲ್ಲ ದುಃಖ-ದಾರಿದ್ರ್ಯಗಳಿಂದ, ಕಷ್ಟ-ಕಾರ್ಪಣ್ಯಗಳಿಂದ, ವ್ಯಥೆ-ವ್ಯಾಕುಲತೆಗಳಿಂದ, ಸಾಲದ ಶೂಲದಿಂದ, ಭವ-ಬಂಧನಗಳಿಂದ ಮುಕ್ತರಾಗಲು ಆಂಜನೇಯನನ್ನು ಸ್ಮರಿಸುವುದು ಲೇಸು ಎಂದು ಪರಾಶರ ಮುನಿಗಳು ಹೇಳಿದ್ದಾರೆ.
ಮಹಿಳೆಯರಿಗಾಗಿ 21 ದಿನ(ಅರ್ಧ-ಮಂಡಲ), ಪುರುಷರಿಗಾಗಿ 48 ದಿನ(ಪೂರ್ಣ ಮಂಡಲ) ಸಾಧನಾ ದೀಕ್ಷೆ ಕೊಡಲಾಗುವುದು. ಹನುಮಾನ್ ಚಾಲೀಸಾ ಜಲ-ಜಪ-ಧ್ಯಾನ ದೀಕ್ಷೆಯನ್ನು ಪಡೆದು ಸಕಾರಾತ್ಮಕ ಹೃನ್ಮನಾತ್ಮ ಶರೀರಗಳ ಬೆಸುಗೆಯಿಂದ, ಭವಬಂಧನಗಳ ದಾಸ್ಯದಿಂದ ಹೊರಬಂದು ಆತ್ಮೋದ್ದಾರದ ಮಾರ್ಗವನ್ನು ಆಧರಿಸಿ ವಿಶ್ವವಂದ್ಯರಾಗಬಹುದು.